ಜೀವನ ಒಂದು ಪಯಣ

ಚಂದದಾದ ಗಾಳಿಯೊಂದು ಬೀಸುತ್ತಿದೆ
ಕುಳಿತು ಬಸ್ಸಿನಲ್ಲಿ ಪಯಣ ಆರಂಭಿಸಿದೆ
ಜೀವನವೇ ಸಾಗರದೊಂದು ಅಲೆ
ಆ ಅಲೆಗಳಲ್ಲಿಯೇ ಈ ಪಯಣ ಅಲೆ

ಗಾಳಿಯು ಬೀಸಿದಾಗ ಅಲೆಗಳ ಕಾಣುವೆ
ಜೀವನವು ಸಹ ಅಲೆಯದೊಂದು ತುಣುಕು
ಜೀವನ ಯಾವ ಸಂದರ್ಭದಲ್ಲಿಯು
ಶಾಶ್ವತವಲ್ಲ ಓ ಮನುವೇ

ಗಾಳಿಯು ನಿಂತಾಗ ಅಲೆಗಳ ನಿಲ್ಲುವು
ಜೀವನ ನಿಂತಾಗ ಪಯಣದ ನಿಲ್ಲುವು
ಪಯಣ ನಿಂತಾಗ ಎಲ್ಲವು ನಿಲ್ಲುವು
ಜೀವನ ಯಾವಾಗಲೂ ಶಾಶ್ವತವಲ್ಲ

ಅರಿವಿನ ಜ್ಯೋತಿ ಬೆಳಗಬೇಕಾದರೆ
ಜೀವನದ ಜ್ಯೋತಿ ಬೆಳಕು ಅವಶ್ಯ
ಜೀವನದ ಬೆಳಕು ಯಾರಿಂದಲು ಅಸಾಧ್ಯ
ಇದು ಎಂದೆಂದಿಗೂ ಶಾಶ್ವತವಲ್ಲ ಓ ಗೆಳೆಯ

ನಾನಾಡುವ ಮಾತೆಲ್ಲಾ ಸವಿಯಾಗಿವೆ
ನಾ ಬರೆಯುವ ಕವಿತೆಯು ಶಾಶ್ವತ
ನನ್ನ ಕನ್ನಡ ನಾಡೆಲ್ಲವು ಶಾಶ್ವತ
ನನ್ನ ಕನ್ನಡ ಭಾಷೆಯು ಶಾಶ್ವತವಾದದ್ದು
ಓ ಮನುವೇ ಓ ಗೆಳೆಯ ಓ ಭಾರತಾಂಬೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತೀರ್ಪು
Next post ಆರೋಪ – ೨

ಸಣ್ಣ ಕತೆ

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಇರುವುದೆಲ್ಲವ ಬಿಟ್ಟು

    ನಿಂತ ರೈಲು ಬೋಗಿಯೊಳಗಿಂದ ನನ್ನ ದೃಷ್ಟಿ ಹೊರಗಿನ ನಿಲ್ದಾಣವನ್ನು ವೀಕ್ಷಿಸುತ್ತಿತ್ತೇ ಹೊರತು ನನ್ನ ಮನಸ್ಸು ಮಾತ್ರ ನಾಗಾಲೋಟದಿಂದ ಓಡುತ್ತಿತ್ತು. ಒಂದು ರೀತಿಯಲ್ಲಿ ಆಲೋಚನೆಗಳು ನನ್ನ ಗೆಳೆಯ ಎಂದೇ… Read more…

  • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

    ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

cheap jordans|wholesale air max|wholesale jordans|wholesale jewelry|wholesale jerseys